Submission 1024

ಅನ್ನದಾತ ರೈತ

ರಚನೆ : ಚಿದಾನಂದ ಕೆ. ಎನ್.

----------------------------------

ಬೀಜವ ಬಿತ್ತುವ ರೈತನ ನೋಡು ಅನ್ನವ ಬೆಳೆಯಲು ಹೊರಟಿಹನು ಚಳಿಮಳೆಯೆನ್ನದೆ ಬಿರು ಬಿಸಿಲಲ್ಲಿ ದುಡಿಮೆಯ ಕಾಯಕ ಮಾಡಿಹನು || ಲೋಕದ ಜನರ ಹಸಿವೆ ನೀಗಿಸೆ ಹಗಲಿರುಳೆನ್ನದೆ ದುಡಿದಿಹನು ಬಡವ ಬಲ್ಲಿದ ಬೇಧವನೆಣಿಸದೆ ನಿಸ್ವಾರ್ಥ ಸೇವೆಯ ಮಾಡಿಹನು || ಧರೆಯೊಳಗೊಬ್ಬನೆ ರೈತ ಮಹಾತ್ಮ ದೈವ ಸ್ವರೂಪಿ ಈ ಜೀವಾತ್ಮ ದೇವರ ಹುಡುಕುವ ಮನುಜರೆ ಕೇಳಿ ಅನ್ನದಾತನೇ ನಿಜ ಪರಮಾತ್ಮ || ರೈತನೆ ದೇಶದ ಬಂಧು ಬಾಂಧವ ಎನ್ನುವ ಸತ್ಯವ ಸಾರೋಣ ||

----------------------------------

ನೋಂದಣಿ ಐಡಿ : KPF-S1-5506

0
Votes
163
Views
1 Year
Since posted

Finished since 346 days, 13 hours and 41 minutes.

Scroll to Top